ಮಂಗಳವಾರ, ಆಗಸ್ಟ್ 14, 2018



 

                            ಸಭೆಯ ಆರಾಧನೆ
 

         ಸಭೆಯು ರಕ್ಷಣೆ ಹೊಂದಿದವರ ಸಮೋಹವಾಗಿದೆ. ಯೇಸು ಕ್ರಿಸ್ತನ ಮೂಲಕ ದೇವರನ್ನು ಸೇವಿಸಿ ಆರಾಧಾಸುವದೇ ಅದರ ಪ್ರಮುಖ ಉದ್ದೇಶವಾಗಿದೆ. ಪೌಲನು ಹೀಗೆ ಹೇಳಿದ್ದಾನೆ “ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರು ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ” (ಕೊಲೊಸ್ಸೆ 3;17).

 

  ಹೊಸ ಒಡಂಬಡಿಕೆಯಲ್ಲಿ ಮೂರು ವಿಧವಾದ ಆರಾಧನೆ ಕಾಣಿಸುತ್ತವೆ. ಮೊದಲನೆಯದು. 

1.ತಿಳಿಯದ ಆರಾಧನೆ:

       ಪೌಲನು ಅಥೇನೆ ಪಟ್ಟಣದಲ್ಲಿರು ಅನೇಕ ವಿಗ್ರಹಗಳನ್ನು ನೋಡಿ ಹೀಗೆ ಹೇಳಿದ್ದಾನೆ “ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿ ಭಕ್ತಿವಂತರೆಂದು ನನಗೆ ತೋರುತ್ತದೆ. ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ  ದೇವತಾ ಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತೀರ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ” (ಅ.ಕೃ.17:23). ತಿಳಿಯದ ದೇವರಿಗೆ ಆರಾಧನೆ ಮಾಡುವವರು ಅಂದು, ಇಂದು ಸಹ ಕೆಲವರು ಇದ್ದಾರೆ. ಲಕ್ಷಗಟ್ಟಲೇ ಜನರು ವಿಗ್ರಹಗಳಿಗೆ, ಮೂರ್ತಿಗಳಿಗೆ ನಮಸ್ಕರಿಸುವುದು ಮಾತ್ರವಲ್ಲದೇ ಸಾವಿರಗಟ್ಟಲೇ ಜನರು ವಾಕ್ಯಗಳನ್ನು ತಿಳಿಯದ ಅನೇಕ ಮತ ಸಮಪ್ರಾದಯ ಪದ್ಧತಿಗಳನ್ನು ಮಾಡುವವರಿದ್ದಾರೆ.

೨.  ವ್ಯರ್ಥ ಆರಾಧನೆ:

            ವ್ಯರ್ಥ ಆರಾಧನೆಯನ್ನು ಕುರಿತು ಬೈಬಲ್ ಬೋಧಿಸುತ್ತದೆ. “ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ” (ಮತ್ತಾಯ 15:9) ಎಂದು ಯೇಸು ಕ್ರಿಸ್ತನು ಹೇಳಿದ್ದಾನೆ. ಪ್ರಜೆಗಳಲ್ಲಿ ಅನೇಕರು ಇಂದು ದೇವರನ್ನು ವ್ಯರ್ಥವಾಗಿ ಆರಾಧಿಸುತ್ತಿದ್ದಾರೆ. ಅವರು ಕರ್ತತನನ್ನೇ ಆರಾಧಿಸುವರು ಎಂಬ ಮಾತು ಸತ್ಯವಾಗಿದ್ದರು, ಅವರ ಆರಾಧನೆ ದೇವರ ಚಿತ್ತಾನುಸಾರವಾಗಿ ಇಲ್ಲವಾದ್ದರಿಂದ, ಮನುಷ್ಯ ಕಲ್ಪಿತ ಸಿದ್ಧಾಂತಗಳ  ಅನುಗುಣವಾಗಿ ಬೋಧಿಸುವದು, ಅದರ ಪ್ರಕಾರ ಮಾಡುವುದೆಲ್ಲ ವ್ಯರ್ಥ. ಅಂಹದರ ಪ್ರಯೋಜನ ಕೇವಲ ಶೊನ್ಯ.
  ೩. ಸತ್ಯ ಆರಾಧನೆಯನ್ನು:

          ಸತ್ಯ ಆರಾಧನೆಯನ್ನು ಕುರಿತು ಬೈಬಲ್ ಹೇಳಿತ್ತದೆ. ಅದು ಆತ್ಮದಿಂದಲೂ, ಸತ್ಯದಿಂದಲೂ ಮಾಡುವಂತದ್ದು. “ದೇವರು ಆತ್ಮ ಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ, ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು” (ಯೋಹಾನ 4:24) ಎಂದು ಯೇಸು ಹೇಳಿದ್ದಾನೆ. ದೇವರು ಅಂಗೀಕರಿಸುವ  ಆರಾಧನೆ ಇಂಹದ್ದು ಮಾತ್ರವೇ. ಆತ್ಮದಿಂದ ದೇವರ ಕಡೆಗೆ ನಡೆಸುವ ಆರಾಧನೆ ಇದು. ವಿನಯದಿಂದಲೂ, ಭಕ್ತಿಭಾವದಿಂದಲೂ ಸತ್ಯವಾಕ್ಯವನ್ನು ಅನುಸರಿಸಿ ಮಾಡುವ ಆರಾಧನೆ ಇದು. ಆರಾಧನೆ ಮಾಡಬೇಕೆಂದು ದೇವರು ಯಾರನ್ನು ಬಲವಂತ ಮಾಡುವದಿಲ್ಲ. ಆದರೆ ಆತನನ್ನು ಆರಾಧಿಸುವವರು ಆತನು ಕೋರುವ ರೀತಿಯಲ್ಲಿ ಆರಾಧಿಸಬೇಕೆಂದು ಅಪೇಕ್ಷಿಸುತ್ತಿದ್ದಾನೆ.

   ಕ್ರಿಸ್ತನ ಸಭೆಯು ಎಂತಹ ಆರಾಧನೆ ಮಾಡಬೇಕು? 

    ಅದು ತಿಳಿಯದ ಆರಾಧನೆ? ಅಲ್ಲವೇ ಅಲ್ಲ. ಮಾನವ ಕಲ್ಪಿತ ಬೋಧನೆಗಳನ್ನು ಅನುಸರಿಸುವ ಆರಾಧನೆ? ಖಂಡಿತ ಅಲ್ಲ. ಆದರೆ ಅದು ಆತ್ಮದಿಂದಲೂ, ಸತ್ಯದಿಂದಲೂ ಮಾಡುವ ದೇವರು ಅಂಗೀಕರಿಸುವಂತಹದ್ದು. ನಾವು ಹೊಸ ಒಡಂಬಡಿಕೆಯನ್ನು ಓದುತ್ತಿರುವಾಗ ಅದರಲ್ಲಿರುವ ಆಜ್ಞೆಗಳ ಪ್ರಕಾರ, ಮಾದರಿಯ ಪ್ರಕಾರ. ಪ್ರಾರಂಭದ ಕ್ರೈಸ್ತರು ಈ ಕೆಳಗಿನ 5 ಅಂಶಗಳನ್ನು ಆರಾಧನೆಯಲ್ಲಿ ಮಾಡಿದರೆಂದು ನಾವು ಕಾಣುತ್ತವೆ.

1.ವಾಕ್ಯವನ್ನು ಓದುವದಕ್ಕೆ ಅವರು ಸೇರಿಬಂದಿದ್ದರು:

       ದೇವರ ವಾಕ್ಯಗಳನ್ನು ತಿಮೊಥೆಯನು ಮೊದಲಿನಿಂದಲೂ ಕೇಳಿದ್ದರು “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು” (2ತಿಮೊಥೆ 2:15) ಎಂದು ಪೌಲನು ತಿಮೊಥೆಯನ್ನು ಎಚ್ಚರಿಸುತ್ತಾನೆ. ಇದು ಎಲ್ಲಾ ಕ್ರೈಸ್ತರಿಗೂ ಮುಖ್ಯವಾಗಿ ಆರಾಧನೆಗೆ ಸೇರಿಬಂದವರಿಗೆ ಅನ್ವಯಿಸುತ್ತದೆ.  ವಾಕ್ಯದ ಮೂಲಕ ದೇವರು ತನ್ನ ಮಕ್ಕಳೊಂದಿಗೆ ಮಾತನಾಡುವ ಸಮಯವಿದು. ಅಪೂಸ್ತಲರ ಕೃತ್ಯಗಳು20:7ರಲ್ಲಿ ಸಭೆಯವರಿಗೆ ಪೌಲನು ಪ್ರಸಂಗ ಮಾಡುವದರ ಮೂಲಕ ವಾಕ್ಯವನ್ನು ಬೋಧಿಸಿದಂತೆ ನಾವು ಗ್ರಹಿಸಬಹುದು.

2.  ಅವರು ಪ್ರರ್ಥನೆ ಮಾಡಿದರು. ಪಂಚಶತ್ತಮ ದಿನದಂದು ಸುವಾರ್ತೆಗೆ ಒಳಗಾದವರು:

 “ಇವರು ಅಪೋಸ್ತಲರ ಬೋಧನೆಯನ್ನು ಕೇಳುವದರಲ್ಲಿಯೂ, ಸಹೋದರರ ಅನ್ಯೋನತೆಯಲ್ಲಿಯೂ, ರೊಟ್ಟಿಮುರಿಯುವದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು” (ಅ.ಕೃ.2:42). ಪ್ರಾರ್ಥನೆಯ ಮೂಲಕ ದೇವರ ಮಕ್ಕಳು ಪರಲೋಕದಲ್ಲಿರು ತಂದೆಯೊಂದಿಗೆ ಮಾತನಾಡುವ ಅವಕಾಶ ದೊರೆಯುತ್ತದೆ. ಕ್ರೈಸ್ತರು ಆರಾಧನೆಗೆ ಕೂಡಿ ಬಂದಾಗ ಪ್ರಾರ್ಥನೆ ಮಾಡದಂತೆ ಏನನೂ  ಮಾಡುವದಿಲ್ಲ.

3.  ಅವರು ಕೀರ್ತನೆಗಳನ್ನು ಹಾಡಿದರು:

     ಪೌಲನು ತನ್ನ ಸಹೋದರರಿಗೆ ಹೀಗೆ ಬರೆದನು “ಆದರೆ ಪವಿತ್ರತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮ ಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ...” (ಎಫೆಸ 5:19). ಮತ್ತು ಕೊಲೊಸ್ಸೆ3:16, ಇಬ್ರಿಯ 13:15 ಗಳನ್ನು ಓದು. ಸಂಗೀತದಲ್ಲಿ ಎರಡು ವಿಧ ಇದೆ. ಒಂದು ಗಾತ್ರ ಸಂಗೀತ, ಮತ್ತೊಂದು ವಾದ್ಯ ಸಂಗೀತ. ಆದರೆ ದೇವರು ಕೋರುವ ಸಂಗೀತ ಯಾವುದು? ನಾವು ಹೃದಯಲ್ಲಿ ಕರ್ತನಿಗೆ ಗಾನಮಾಡಬೇಕೆಂದು ವಾಕ್ಯವು ಹೇಳುತ್ತದೆ. ಅದ್ದರಿಂದ ವಾದ್ಯ ಸಂಗೀತವನ್ನು ಪ್ರಾರಂಭದ ಕ್ರೈಸ್ತರು ಉಪಯೋಗಿಸಿಲ್ಲ, ಅವರು ಕೇವಲ ತಮ್ಮ ಭಾಯಿಯಿಂದ ದೇವರಿಗೆ ಸ್ತುತಿಗಾನ ಮಾಡಿದರು. ಅನೇಕ ಶತಾಮಾನಗಳ ನಂತರ ಮನುಷ್ಯರು ಆರಾಧನೆಯಲ್ಲಿ ವಾದ್ಯಗಳನ್ನು ಉಪಯೋಗಿಸುವದನ್ನು ಪ್ರಾರಂಭಿಸಿದರು. ಇದನ್ನು ದೇವರು ಏರ್ಪಡಿಸಲಿಲ್ಲ. ದೇವರು ಅದನ್ನು ಅಂಗೀಕರಿಸುವದಿಲ್ಲ. ಕ್ರೈಸ್ತರು ವಾದ್ಯ ಸಂಗೀತದಿಂದ ಆರಾಧನೆ ಮಾಡಿ ದೇವರನ್ನು ಸ್ತುತಿಸಲಿಲ್ಲ.

4.  ಅವರು ಕರ್ತನ ಭೋಜನದಲ್ಲಿ ಪಾಲುಗಾರರಾಗಲು ಕೊಡಿಬಂದಿದ್ದರು:

      ಅ.ಕೃ.20:7ರಲ್ಲಿ ಇದರ ಮಾದರಿ ನಮಗೆ ಕಾಣುತ್ತದೆ. ಮತ್ತಾಯ 26:26-28; 1ಕೊರಿಂಥ 11ನೇ ಅಧ್ಯಾಯದಲ್ಲಿ ರೊಟ್ಟಿಯನ್ನು ಯೇಸುಕ್ರಿಸ್ತನ ದೇಹಕ್ಕ ಸಾದೃಸ್ಯವಾಗಿಯೂ, ದ್ರಾಕ್ಷರಸವು ಆತನ ರಕ್ತಕ್ಕೆ ಸಾದೃಸ್ಯವಾಗಿಯೂ ಮಾಡಬೇಕೆಂದು ಬರೆಯಲ್ಪಟ್ಟಿದೆ. ಇಂದು ನಾವು ಸಹ ಇದನ್ನು ಹೀಗೆ ಮಾಡಬೇಕು.

5.  ಅವರು ಕಾಣಿಕೆಗಳನ್ನು ಕೊಟ್ಟರು:

        ಗಲಾತ್ಯದಲ್ಲಿಯೂ, ಕೊರಿಂಥದಲ್ಲಿಯೂ ಇರುವ ಸಹೋದರರಿಗೆ ಪೌಲನು ಹೀಗೆ ಬರೆದನು “ನಾನು ಬಂದಾಗ ಹಣ ವಸೂಲು ಮಾಡಬೇಕಾದ ಅವಶ್ಯವಾಗದಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲೆನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು” (1ಕೊರಿಂಥ 16:2). 2ಕೊರಿಂಥ 9:7ನ್ನು ಸಹ ಓದು.

       ಪ್ರಾರಂಭದ ಕ್ರೈಸ್ತರು ದೇವರನ್ನು ಆರಾಧಿಸುವದಕ್ಕೆ ವಾರದ ಮೊದಲನೆಯ ದಿನದಲ್ಲಿ ಕೂಡಿಬಂದಿದ್ದರು (ಅ.ಕೃ.20:7; 1ಕೊರಿಂಥ 16:2). “ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಡಿಯಾಗಿ  ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ” (ಇಬ್ರಿಯ 10:25). ಇಂದಿನ ಕ್ರೈಸ್ತರು ಸಹ ವಾರದ ಮೊದಲನೆಯ ದಿನ ಅಂದರೆ ಭಾನುವಾರ ದಿನದಂದು ಆರಾಧನೆ ಮಾಡಬೇಕು ಅದ್ದರಿಂದ ಈ ಎಚ್ಚರಿಕೆ ಇಂದಿನ ಕ್ರೈಸ್ತರಾದ ನಮಗೂ ಅನ್ವಯಿಸುತ್ತದೆ.

      ಸಭೆಯ ಆರಾಧನೆ ಬಹಳ ಸುಲಭವಾದ್ದದು, ಸೂಕ್ಷ್ಮವಾದ್ದದು. ಆದುದರಿಂದ ಅನೇಕರು ಪೂಜೆಗಳಿಂದಲೂ, ಪುನಸ್ಕಾರಗಳಿಂದಲೂ, ಮನುಷ್ಯ ಕಲ್ಪಿತ ಆಚರಣೆಗಳಿಮದಲೂ, ಆಡಂಬರದಿಂದಲೂ ಇರಬೇಕೆಂದು ಆಲೊಚಿಸಿಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಆರಾಧನೆಯನ್ನು ಕುರಿತು ದೇವರು ತನ್ನ ಚಿತ್ತವನ್ನು ತನ್ನ ಗ್ರಂಥದ ಮೂಲಕ ನಮಗೆ ತಿಳಿಸಿದ್ದಾನೆ. ಅದನ್ನು ನಾವು ಸ್ವಲ್ಪವಾದರೂ ಬದಲಾಯಿಸುವದಕ್ಕೆ ಮನುಷ್ಯನಿಗೆ ಅಧಿಕಾರವಿಲ್ಲ. ದೇವರ ಶಾಪಕ್ಕೆ ಗುರಿಯಾಗದಂತೆ ಅದಕ್ಕೆ ಸೇರಿಸುವುದಾಗಲಿ, ಅದರಿಂದ ತೆಗೆದು ಹಾಕುವದಾಗಲಿ ಮಾಡಬಾರದು. ದೇವರು ಮಾತನಾಡಿರುವದರಿಂದ ಆತನ ಜನರು ಆತನಿಗೆ ವಿಧೇಯರಾಗಬೇಕು ಆಗ ಮಾತ್ರವೇ ನಾವು ದೇವರನ್ನು ಸ್ತುತಿಸಿ, ಮಹಿಮೆಪಡಿಸಿ ಆರಾಧಿಸಬಹುದು.
                                                               
                                                                        ವಂದನೆಗಳು 



ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 
ಕ್ರಿಸ್ತನ ಸಭೆ 
ಸಂಗನಕಲ್ಲು 
ಸೆಲ್: ೯೭೩೯೪೦೮೭೨೭.


ಕಾಮೆಂಟ್‌ಗಳಿಲ್ಲ: