ಶನಿವಾರ, ಆಗಸ್ಟ್ 18, 2018

                                                    


      ನಮಗೆ ಕೊಟ್ಟಅವಕಾಶಗಳು 
 
      ಕ್ರಿಸ್ತನು ತನ್ನ ಸಭೆಯನ್ನು ಸ್ಥಾಪಿಸಿದಾಗ, ಅಪೊಸ್ತಲರ ಕಾರ್ಯ 2ನೇ ಅಧ್ಯಾಯದಲ್ಲಿ ಬರೆದಿರುವಂತೆ “ಸಹೋದರರೇ ನಾವೇನು ಮಾಡಬೇಕು” ಎನ್ನುವ ಪ್ರಶ್ನೆಗೆ ಮೊದಲನೇ ಸಾರಿ ಯೆಹೂದ್ಯರು ಪೇತ್ರನನ್ನು ಕೇಳಿದರು ಅದರ ಪೂರ್ತಿ ಸಾರಾಂಶವನ್ನು ಓದುವುದರಲ್ಲಿ ನಮಗೆ ಎಷ್ಟೊ ಸಂತೋಷವಾಗುತ್ತದೆ. “ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಏಕಮನಸ್ಸಿ ನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು. ಆಗ ಬಿರುಗಾಳಿ ಬೀಸುತ್ತದೊ ಎಂಬಂತೆ ಪಕ್ಕನೆ ಆಕಾಶದೊಳಗಿಂದ ಒಂದು ಶಬ್ಧವುಂಟಾಯಿತು ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು..... (1-2) ಆ ಸಪ್ಪಳವಾದಾಗ......(6ಎ) ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಪ್ರಸಂಗ ಮಾಡಿದನು......(14)ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಲಾಲಿಸಿರಿ-ನಜರೇತಿನ ಯೇಸು ಇದ್ದಾನಲ್ಲಾ ದೇವರು ನಿಮಗೋ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕ ಕಾರ್ಯಗಳನ್ನೂ ನಿಮ್ಮಲ್ಲಿ ನಡೆಸಿ ಆತನನ್ನು ತನಗೆ ಮೆಚ್ಚಿಕೆಯಾದನೆಂದು ನಿಮಗೆ ತೋರಿಸಿಕೊಟ್ಟನು. ಆ ಯೇಸು ದೇವರ ಸಂಕಲ್ಪಕ್ಕೂ ಭವಿಷತ್ ಜ್ಞಾನಕ್ಕೊ ಅನುಸಾರವಾಗಿ  ಒಪ್ಪಿಸಲ್ಪಟ್ಟಿರಲು ನೀವು ಅನ್ಯ ಜನರ ಕೈಯಿಂದ ಆತನನ್ನು  ದೇವರು ಮರಣವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಯಾಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು...... (22-24) ಆದ್ದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ ಎಂದು ಹೇಳಿದನು. ಇದನ್ನು ಅವರು ಕೇಳಿ ಹೃದಯದಲ್ಲಿ ಅಲಗು ನೆಟ್ಟಂತಾಗಿ ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ-ಸಹೋದರರೇ ನಾವೇನು ಮಾಡಬೇಕು? ಎಂದು ಕೇಳಲು ಪೇತ್ರನು ಅವರಿಗೆ-ನಿಮ್ಮ ಪಾಪಗಳು ಪರಿಹಾರವಗುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನೂ ದೇವರ ಕಡೆಗೆ ತಿರಿಗಿಕೊಂಡು ಯೇಸು ಕ್ರಿಸ್ತನ ಹೇಸರಿನ ಮೇಲೆ ದೀಕ್ಷಾಸ್ನಾನ ಮಾಡಿಸಿ ಕೊಳ್ಳಿರಿ  ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ; ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರದಲ್ಲಿರುವವರೆಲ್ಲರಿಗೂ ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವವರೆಲ್ಲರಿಗೆ ಮಾಡೋಣವಾಗಿದೆ ಎಂದು ಹೇಳಿದನು.....(36-39) ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನ ಮಾಡಿಸಿಕೊಂಡರು......(41)ಇವರು ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿಮುರಿಯು ವುದರ ಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. ಎಲ್ಲರಿಗೂ ಭಯ ಉಂಟಾಯಿತು, ಇದಲ್ಲದೆ ಅನೇಕ ಅಧ್ಬುತಕಾರ್ಯಗಳೂ ಅಪೊಸ್ತಲರ ಕೈಯಲ್ಲಿನಡೆದವು...... (42-43). 

        ನಮಗೂ ಸಹ ಈ ರೀತಿಯಾದ ಅವಕಾಶಗಳು ಇಗಲೂ ಇವೆ. ಇಂತಹ ಅವಕಾಶಗಳನ್ನು ಒದಗಿಸುತ್ತಿರುವ ಕ್ರಿಸ್ತನ ಸಮಾಧಾನ ಸಂದೇಶವನ್ನು ನಾವು ಅಂಗೀಕರಿಸುತ್ತಿದ್ದೇವಾ? ಆ ಸಂದರ್ಭದಲ್ಲಿ ಕೆಲವರು ತಿರಸ್ಕರಿಸಿದರು ಆದರೆ 3000 ಜನರು ಅದನ್ನು (ಸಮಾಧಾನ ಸಂದೇಶ) ಅಂಗೀಕರಿಸಿದರು ವಾಕ್ಯವನ್ನು ಅನುಸರಿಸಿ ಈ ರೀತಿಯಾಗಿ ನಡೆದುಕೊಂಡರು.

     ಅವರು ಸುವಾರ್ತೆಯನ್ನು ಕೇಳಿದರು ಅಂದರೆ ಕ್ರಿಸ್ತನು ಶಿಲುಬೆಗೆ ಹಾಕಲ್ಪಟ್ಟನು, ಮರಣಹೊಂದಿ ಸಮಾಧಿ ಮಾಡಲ್ಪಟ್ಟು, ತಿರಿಗಿ ಎಬ್ಬಿಸಲ್ಪಟ್ಟನು. 

1. ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು.
2. ನಾವೇನು ಮಾಡಬೇಕು ಎಂದು ಕೇಳಿದರು.
3. ಸುವಾರ್ತೆ ಸಂದೇಶವನ್ನು ಅಂಗೀಕರಿಸಿದರು. 
4. ಮಾನಸಾಂತರ ಹೊಂದಿದರು.
5.ಅವರ ಪಾಪಗಳ ಕ್ಷಮಾಪಣೆಗೋಸ್ಕರ ಯೇಸುಕಿಸ್ತನ ಹೆಸರಿನಲ್ಲಿ ದೀಕ್ಷಸ್ನಾನ (ಮುಳುಗಿಸಿವುದು) ಹೊಂದಿದರು. 
6. ಪರಿಶುದ್ಧಾತ್ಮವರವನ್ನು ಹೊಂದಿದರು. 
7. ಮೂರು ಸಾವಿರ ಜನರು ಯೇಸುಕ್ರಿಸ್ತನ ಶಿಷ್ಯರ ಸಂಖ್ಯೆಯಲ್ಲಿ ಸೇರಿಸಲ್ಪಟ್ಟರು. 
8. ಅವರೆಲ್ಲರೂ ಇವುಗಳಲ್ಲಿ ನಿರತರಾಗಿದ್ದರು.
                         * ಸಹವಾಸದಲ್ಲಿಯೂ.
                         *ಪ್ರಾರ್ಥನೆಯಲ್ಲಿಯೂ.
                         *ರೊಟ್ಟಿ ಮುರಿಯುವುದರಲ್ಲಿಯೂ.
                         *ಕಾಣಿಕೆ ಕೊಡುವುದರಲ್ಲಿಯೂ.

           ಕೇಳಿದವರೆಲ್ಲರೂ ಒಂದು ತೀರ್ಮಾನವನ್ನು ತೆಗೆದುಕೊಂಡ ವಿಷಯವನ್ನು ನಾವು ಇಲ್ಲಿ ಗಮನಿಸಬಹುದು. ಆ ನಿರ್ಣಯವು ಅಂದರೆ ಸಮಾಧಾನ ಸಂದೇಶ ಸುವಾರ್ತೆಯನ್ನು ಅಂಗೀಕರಿಸುವುದಾಗಿರಬಹುದು ಅಥವಾ ತಿರಸ್ಕರಿಸುವು ದಾಗಿರ ಬಹುದು ಯಾವುದೊಂದು ಅಗಿರಬಹುದು. ಈ ಸಮಾಧಾನ ಸಂದೇಶ ಸುವಾರ್ತೆ ಯನ್ನು ಕೇಳುವುದಕ್ಕೆ ನಾವು ಈ ದಿನ ನಮಗೆ ಅನೇಕ ಮಾರ್ಗಗಳಿವೆ. ಕೆಲವರು ಆಸಕ್ತಿಯಿಂದ ಬೈಬಲ್ ಓದುವುದರ ಮೂಲಕ ಅಥವಾ ಬೇರೊಬ್ಬ ಸಹಾಯದಿಂದ ಬೈಬಲ್‍ನ್ನು ಪರಶೀಲಿಸುವುದರ ಮೂಲಕ ಅಥವಾ ಇಂಟರ್‍ನೆಟ್ ಮೂಲಕ, ಪತ್ರಿಕೆಗಳು, ಬೈಬಲ್ ತರಗತಿಗಳ ಮೂಲಕ ಸುವಾರ್ತೆ ಸಂದೇಶವನ್ನು ತಿಳಿದು ಕೊಳ್ಳುತ್ತಿದ್ದೇವೆ. ಕ್ರಿಸ್ತನ ಸುವಾರ್ತೆಯನ್ನು ಕೇಳಿದವರು ಅಥವಾ ಶಿಷ್ಯರಾಗಿ ಅನುಸರಿಸುವವರು, ರಕ್ಷಣೆಹೊಂದುವಷ್ಟು ವಿಶ್ವಾಸ ಅವರಲ್ಲಿ ಉಂಟಾದಾಗ ಅವರು ನೀರಿನಲ್ಲಿ ಮುಳಿಗಿಸುವುದರ ಮೂಲಕ ದೀಕ್ಷಾಸ್ನಾನ ಹೊಂದಿ ಅವರ ಪಾಪಗಳಿಗೆ ಕ್ಷಮಾಪಣೆ ಹೊಂದುವ ಅವಕಾಶವನ್ನು ದೇವರು ಕಲ್ಪಿಸುತ್ತಿದ್ದಾನೆ.


                                                                       ವಂದನೆಗಳು  


ಕಾಮೆಂಟ್‌ಗಳಿಲ್ಲ: